ಪ್ರಬೋಧಿನೀ ಗುರುಕುಲ : ಅರ್ಧ ಮಂಡಲೋತ್ಸವ ವರ್ಷ: ೨೦೧೯-೨೦೨೦.
ಇಂದು ಭಾರತ ನಿಜಾರ್ಥದಲ್ಲಿ ಪ್ರಕಾಶಿಸುತ್ತಿದೆ. ಭಾರತದ ವೇದ, ಯೋಗ, ಸಂಸ್ಕೃತ, ಆಯುರ್ವೇದ ಇತ್ಯಾದಿಗಳು ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಆರಾಧಿಸಲ್ಪಡುತ್ತಿವೆ. ಇದೇಕಾರಣದಿಂದಾಗಿ ನಮ್ಮ ಜವಾಬ್ದಾರಿ ಹೆಚ್ಚಿದೆ. ಜಗತ್ತಿಗೆ ಗುರುವಾಗಿದ್ದ ಭಾರತವನ್ನು ಮತ್ತೊಮ್ಮೆ 'ಗುರು'ವಾಗಿ ಮಾಡಬೇಕಾದ ಹೊಣೆ ನಮ್ಮದು. ಇದು ನಮ್ಮ ಶಿಕ್ಷಣವ್ಯವಸ್ಥೆಯಿಂದ ಮಾತ್ರ ಸಾಧ್ಯ. ಆತಂಕಕಾರಿ ವಿಷಯವೆಂದರೆ ಅತೀವ ಧಾವಂತಿಕೆಯ ಪರಿಣಾಮವಾಗಿ ನಾವು ಶಿಕ್ಷಣವನ್ನು ಕೇವಲ ಮಾಹಿತಿಗಾಗಿ ಸೀಮಿತಗೊಳಿಸಿಸ್ಪರ್ಧಾತ್ಮಕ ಜಗತ್ತನ್ನು ರೂಪಿಸಹೊರಟಿದ್ದೇವೆ. ಹೀಗಾಗಿ 'ಮಾಹಿತಿ' ಆಧಾರಿತ ಶಿಕ್ಷಣವನ್ನು 'ಮೌಲ್ಯ' ಆಧಾರಿತ ಶಿಕ್ಷಣವಾಗಿ ಪುನಃ ಬದಲಿಸಬೇಕಿದೆ. ಈ ಹಿನ್ನೆಲೆಯಲ್ಲಿಗುರುಕುಲಗಳ ಪರಿಕಲ್ಪನೆ ಮೌಲ್ಯಾಧಾರಿತ ಶಿಕ್ಷಣಕ್ಕೊಂದು ಬುನಾದಿ. ಶಿಕ್ಷಣದಲ್ಲಿ ಭಾರತೀಯತೆಯನ್ನು ತರುವುದೇ ಈ ಗುರುಕುಲಗಳ ಉದ್ದೇಶ. ಇಂತಹ ಗುರುಕುಲಗಳಲ್ಲಿಚಿಕ್ಕಮಗಳೂರು ಜಿಲ್ಲೆಯ, ಕೊಪ್ಪ ತಾಲೂಕಿನ ಹರಿಹರಪುರದ 'ಪ್ರಬೋಧಿನೀ ಗುರುಕುಲ' ಕಳೆದ ೨೪ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಪ್ರತಿ ವರ್ಷ ಹತ್ತು ವರ್ಷಪೂರೈಸಿದ ೧೫ರಿಂದ ೨೦ ಮಕ್ಕಳನ್ನು ಸೇರ್ಪಡಿಸಿಕೊಂಡು ೫ ವರ್ಷಗಳ 'ಅಧಿಶೀಲ' (ಪ್ರಾಥಮಿಕ) ಹಾಗೂ ಮತ್ತೆ ೭ ವರ್ಷಗಳ 'ಅಧಿಪ್ರಜ್ಞ' (ಉನ್ನತ) ಶಿಕ್ಷಣವನ್ನುನೀಡಲಾಗುತ್ತಿದೆ. ವೇದ, ಸಂಸ್ಕೃತ, ಯೋಗವೂ ಸೇರಿದಂತೆ ಇಂದಿನ ಆಧುನಿಕ ಶಿಕ್ಷಣವನ್ನು ಸನಾತನ ಭಾರತೀಯ ಸಂಸ್ಕೃತಿಯ ಆಧಾರದ ಮೇಲೆ ನೀಡುವುದೇ ಈಗುರುಕುಲದ ವೈಶಿಷ್ಟ್ಯ. ಕಾರ್ಯ ಯೋಜನೆಯ ದೃಷ್ಟಿಯಿಂದ ಈ ವ್ಯವಸ್ಥೆಯನ್ನು ವೇದ, ವಿಜ್ಞಾನ (ಇಂದಿನ ಆಧಿನಿಕ ಶಿಕ್ಷಣ), ಯೋಗ, ಕೃಷಿ ಮತ್ತು ಕಲಾ ಕೌಶಲವೆಂಬ'ಪಂಚ ಮುಖಿ' ಶಿಕ್ಷಣ ವ್ಯವಸ್ಥೆಯ ಪರಿಕಲ್ಪನೆಯಲ್ಲಿ ರೂಪಿಸಲಾಗಿದೆ. ಇಲ್ಲಿ ಶಿಕ್ಷಣವನ್ನು ಪೂರೈಸಿದ ಮಕ್ಕಳು ಸಮಾಜದ ಬೇರೆ ಬೇರೆ ಸ್ತರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅರ್ಧ ಮಂಡಲೋತ್ಸವ ವರ್ಷ: ೨೦೧೯-೨೦೨೦.
ನಮ್ಮ ಪರಂಪರೆಯಲ್ಲಿ ೪೮ರ ಗಣಮಾನವನ್ನು ಒಂದು 'ಮಂಡಲ'ವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ, ೨೪ ವರ್ಷಗಳನ್ನು ಪೂರೈಸಿದ ನಮ್ಮ ಗುರುಕುಲ 'ಅರ್ಧಮಂಡಲೋತ್ಸವ'ವನ್ನು ಆಚರಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ಶಿಕ್ಷಣದ ಆಧಾರ ಸ್ತoಭಗಳೆನಿಸಿದ ವೇದ, ಯೋಗ, ಸಂಸ್ಕೃತ, ಸಾವಯವ ಕೃಷಿಗಳಿಗೆ ಸಂಬಂಧಿಸಿದವಿಚಾರ ಸಂಕಿರಣಗಳನ್ನು ಏರ್ಪಡಿಸಿ ತನ್ಮೂಲಕ ಗುರುಕುಲವನ್ನುಸಮಾಜಕ್ಕೆ ಇನ್ನಷ್ಟು ಪರಿಚಯಿಸುವ ಉದ್ದೇಶ ನಮ್ಮದು. ಈ ಮೂಲಕ ನಮ್ಮ ಭಾರತೀಯ ಶಿಕ್ಷಣದಅವಶ್ಯಕತೆಯನ್ನು ಹಾಗೂ ಶಿಕ್ಷಣದಲ್ಲಿ ಭಾರತೀಯತೆಯ ಅವಶ್ಯಕತೆಯನ್ನು ಸಮಾಜಕ್ಕೆ ನಿರೂಪಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ.
ಗುರುಕುಲದ ಪರಿಕಲ್ಪನೆಯಲ್ಲಿ ಪ್ರಾಥಮಿಕ ಅವಶ್ಯಕತೆಗಳಾದ ಆಹಾರ, ವಸತಿ, ವಿದ್ಯೆ, ಔಷಧಿಗಳು ವಾಣಿಜ್ಯದ ವ್ಯಾಪ್ತಿಗೆ ಒಳಪಡುವುದಿಲ್ಲ. ಹಾಗಾಗಿ ಇವೆಲ್ಲವೂ ಇಲ್ಲಿಸಂಪೂರ್ಣ ಉಚಿತ (ಆದರೆ ಇಂದು ಇದೇ ಪ್ರಾಥಮಿಕ ಅವಶ್ಯಕತೆಗಳು ಸಮಾಜದಲ್ಲಿ ವ್ಯಾಪಾರದ ಕೇಂದ್ರಗಳಾಗಿ ಮಾರ್ಪಟ್ಟಿರುವುದು ಒಂದು ವಿಪರ್ಯಾಸ). ಈ ವ್ಯವಸ್ಥೆಗಳಯೋಜನೆಗಳಿಗೆ ಸಮಾಜವೇ ಗುರುಕುಲದ ಪೋಷಣೆಗೆ ಸಹಕರಿಸಬೇಕಾಗಿದೆ. ಸಮಾಜದ ಜವಾಬ್ದಾರಿಯುತ ಭಾಗವಾದ ತಾವು ಗುರುಕುಲದ ಪೋಷಣೆಯ ನಿಮಿತ್ತ ತನು-ಮನ-ಧನ ರೂಪವಾಗಿ ಫಾಲ್ಗೊಳ್ಳಬೇಕೆಂದು ಗುರುಕುಲದ ಪೂರ್ವ ಛಾತ್ರನಾಗಿ (ಹಳೆ ವಿದ್ಯಾರ್ಥಿ) ನಾನು ಇಚ್ಚಿಸುತ್ತೇನೆ. ಧನ್ಯವಾದಗಳು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಅಂತರ್ಜಾಲ: http:// prabodhinigurukula.org/
ಇಂತಿ,
ಸದಾ ನಿಮ್ಮವ,
ಹ.ನಾ.ಮಾಧವ ಭಟ್
ಮಾರ್ಗಶೀರ್ಷ - ಅಮಾವಾಸ್ಯಾ
ಬೆಂಗಳೂರು.
No comments:
Post a Comment